ಕರ್ನಾಟಕದಲ್ಲಿ ನಾಟಕ ರಂಗಭೂಮಿಗೆ ಒಂದು ಸ್ಪಷ್ಟ ಆಕಾರ ಬಂದದ್ದು 1880ರ ಆಚೆ-ಈಚೆ. ಸಂಗೀತನಾಟಕವೆಂದೇ ಹೆಸರಾದ ಆ ಕಾಲದ ನಾಟಕಗಳು ಯಕ್ಷಗಾನ ರಂಗಭೂಮಿಯಿಂದ ಮೊದಲ ಪ್ರೇರಣೆಯನ್ನು ಪಡೆದವು ಎಂದು ಪ್ರತೀತಿ. ಸಂಸ್ಕೃತ ನಾಟಕಗಳು ಹಾಗೂ ಇಂಗ್ಲೀಷ್ನ 'ಅಪೇರಾ'ಗಳನ್ನೂ ಬಳಸಿಕೊಂಡದ್ದು ನಿಜ. ಮೊದಲ ದಿನಗಳ ಅನುಕರಣೆಯಿಂದ ಬಿಡಿಸಿಕೊಂಡು ನಾಟಕ ರಂಗಭೂಮಿಯು ಒಂದು ಸ್ವತಂತ್ರರೂಪ ತಾಳಲು ಸಾಧ್ಯವಾದದ್ದು ಆ ಕಾಲದ ಸುಪ್ರಸಿದ್ಧ ನಟರಾದ ವರದಾಚಾರ್ಯರಿಂದ.
ಕನ್ನಡ ರಂಗಭೂಮಿಗೆ ನಾನು ಪದಾರ್ಪಣ ಮಾಡಿ ಆರು ದಶಕಗಳು ಜಾರಿ ಹೋಗಿವೆ. ಈ ಆರು ದಶಕಗಳ ಬಣ್ಣದ ಬದುಕಿನಲ್ಲಿ ಅನೇಕ ಕಷ್ಟಕೋಟಲೆಗಳನ್ನು ಅನುಭವಿಸಿದ್ದೇನೆ. ರಂಗಭೂಮಿಯ ಏಳುಬೀಳುಗಳನ್ನು ಕಂಡಿದ್ದೇನೆ. ಅನೇಕ ಪ್ರತಿಭಾನ್ವಿತ ಅಭಿನೇತ್ರಿಯರೂ, ಕಲಾತಪಸ್ವಿಗಳೂ ಕನ್ನಡ ರಂಗಕಲೆಯನ್ನು ಪ್ರಜ್ವಲಗೊಳಿಸಿದ್ದನ್ನು ಕಂಡಿದ್ದೇನೆ.
ಯುಗಾವತಾರನೊಬ್ಬನು ಬರುವಾಗ ಅವನು ತನ್ನೊಂದಿಗೆ ತನ್ನ ಪರಿವಾರವನ್ನೂ ಕರೆತಂದು ಜನರಿಗೆ ತಮ್ಮ ಆಗಮನದ ಇದ್ದೇಶ, ತನ್ನ ಸಾಧನೆ-ತಪಶ್ಚರ್ಯೆಗಳ ಅರ್ಥವನ್ನು ಮನಗಾಣಿಸುತ್ತಾನೆ. ಶ್ರೀ ರಾಮಕೃಷ್ಣರು ತಮ್ಮ ಲೀಲಾನಾಟಕದಲ್ಲಿ ಸಹಕರಿಸಲು ಕೆಲವು ಸಮೀಪವರ್ತಿಗಳನ್ನು ಹೊಂದಿದ್ದರೆಂಬುದು ನಮಗೆ ತಿಳಿದಿದೆ.
ಯಾವುದೇ ಅಧ್ಯಯನಕ್ಕೂ ನಾವು ಮೊದಲು ಈ ಬದಲಾವಣೆಗಳನ್ನುಂಟು ಮಾಡುವ ಭೂವ್ಯಾಪಾರ ಕತೃಗಳ ಉತ್ಪತ್ತಿ, ಸ್ವಭಾವ ಮತ್ತು ಪ್ರಮಾಣಗಳ ಕೆಲವು ವಿಚಾರಗಳನ್ನೂ ಅದರೊಂದಿಗೆ ಈ ಕತೃಗಳು ನಡೆಸುತ್ತಿರುವ ಕಾರ್ಯಗತಿಯ ಕಾಲಾವಧಿಯ ನಿರ್ಧಿಷ್ಟ ಭಾವನೆಯನ್ನೂ ತಿಳಿದಿರಬೇಕೆಂಬುದು ಸ್ಪಷ್ಟವಾಗುತ್ತದೆ.